1.
ವೈಯ್ಯಾರಿ ನಿನ್ನ ಮೈಮಾಟ...
ಮಧುರಸ ಭರಿತ ಬಿಂದಿಗೆ..
ವ್ಹಾ... ವ್ಹಾ..
ವೈಯ್ಯಾರಿ ನಿನ್ನ ಮೈಮಾಟ...
ಮಧುರಸ ಭರಿತ ಬಿಂದಿಗೆ..
ವ್ಹಾ... ವ್ಹಾ..
ಹುಣ್ಣಿಮೆ ಕಳೆದ ಮೇಲೆ...
ಪಾಡ್ಯ ಬಿದಿಗೆ ತದಿಗೆ...!!
2.
ಆಹಾ..!! ನಿನ್ನ ಚೆಲುವ ವದನ..
ನೋಡಿದರೆ ಸಾಕು... ಎದೆಯ ಬಡಿತ
ಏರುತ್ತದೆ....
ವ್ಹಾ... ವ್ಹಾ...
ಆಹಾ..!! ನಿನ್ನ ಚೆಲುವ ವದನ..
ನೋಡಿದರೆ ಸಾಕು... ಎದೆಯ ಬಡಿತ
ಏರುತ್ತದೆ....
ವ್ಹಾ... ವ್ಹಾ...
ಬಳಸುವ ಸೌಂದರ್ಯ ವರ್ಧಕಗಳ
ಪಟ್ಟಿ ಮಾತ್ರ ಕೊಡಬೇಡ...
ನನ್ನ ಹೃದಯ ಬಡಿತ ನಿಲ್ಲುತ್ತದೆ....!!
3.
ಹೇಳು ಪ್ರಿಯೆ...
ಕನಸಿನಲ್ಲಿ ಬರುವೆನೆಂದು
ನೀನು ಹೇಳಿದ್ದು ಏಕೆ...??
ವ್ಹಾ.. ವ್ಹಾ....
ಹೇಳು ಪ್ರಿಯೆ...
ಕನಸಿನಲ್ಲಿ ಬರುವೆನೆಂದು
ನೀನು ಹೇಳಿದ್ದು ಏಕೆ...??
ವ್ಹಾ.. ವ್ಹಾ....
ಅಕ್ಕ ಪಕ್ಕದ ಮನೆಗೂ ಕೇಳ್ತಿದೆಯಂತೆ...
ನನ್ನ ಅಬ್ಬರದ ಗೊರಕೆ...!!
4.
ಮಿಂಚಾಗಿ ನೀನು ಬರಲು...
ನಿಂತಲ್ಲಿಯೇ ಮಳೆಗಾಲ...
ವ್ಹಾ... ವ್ಹಾ..
ಮಿಂಚಾಗಿ ನೀನು ಬರಲು...
ನಿಂತಲ್ಲಿಯೇ ಮಳೆಗಾಲ...
ವ್ಹಾ... ವ್ಹಾ..
ನೀರು ನಿಂತಲ್ಲಿಯೇ ನಿಂತರೆ..
ಸೊಳ್ಳೇಗಾಲ...ಸೊಳ್ಳೇಗಾಲ...ಸೊಳ್ಳೇಗಾಲ...
5.
ಹುಡುಗಾ... ಕೈ ಮುಗಿದು ಬೇಡುತ್ತೇನೆ...
ಬರಬೇಡ ನಮ್ಮ ಬೀದಿಗೆ..
ಹುಡುಗಿಯರೆಲ್ಲ ಮೂರ್ಛೆ ಹೋಗುತ್ತಾರೆ..
ಹುಡುಗಾ... ಕೈ ಮುಗಿದು ಬೇಡುತ್ತೇನೆ...
ಬರಬೇಡ ನಮ್ಮ ಬೀದಿಗೆ..
ಹುಡುಗಿಯರೆಲ್ಲ ಮೂರ್ಛೆ ಹೋಗುತ್ತಾರೆ..
ಕೋಪ ಮಾಡ್ಕೊಳಲ್ಲಾ ಅಂದ್ರೆ ಒಂದು ಮಾತು..
ಮುಚ್ಚಿಡದೆ ಕೇಳುತ್ತೇನೆ...
ಹೌದೂ.. ನೀನು ಸ್ನಾನ ಮಾಡ್ದೇ ಎಷ್ಟು ದಿನಾ ಆಯ್ತು..??
ಹಿಂದಿಯಲ್ಲಿ ಅಣಕು ಶಾಯರಿಗಳು ಜನಪ್ರಿಯ... ಗಂಭೀರ ಶಾಯರಿಗಳು ಮನಸ್ಸಿಗೆ ಹತ್ತಿರವಾಗಿ ಸದಾಕಾಲ ನೆನಪಿನಲ್ಲಿ ಉಳಿದರೆ, ಈ ಅಣಕು ಶಾಯರಿಗಳು ತಕ್ಷಣಕ್ಕೆ ನಗೆ ಚಿಮ್ಮಿಸಿ ಮನಸ್ಸಿಗೆ ಆಹ್ಲಾದ ನೀಡುತ್ತವೆ... ಕನ್ನಡದಲ್ಲೂ ಬರೆಯಲು ಪ್ರಯತ್ನ ಮಾಡಿದೆ.. ಈ ಮೇಲಿನವು ಹುಟ್ಟಿಕೊಂಡವು... ಇಷ್ಟವಾಯ್ತಾ...?? ದಯವಿಟ್ಟು ಹೇಳಿ....
Monday, 13 July 2009
Sunday, 12 July 2009
ಕೊಡಬಲ್ಲೆಯಾ ಉತ್ತರ...???
ಉರಿವ ಎದೆಯಲಿ ಸಾವಿರ ಪ್ರಶ್ನೆ..
ಕಿವಿಯನು ತೆರೆದು ನೀ ಕೇಳಿಬಿಡು...
ಇನ್ನು ತಡೆಯೆ ನಾ ನಿನ್ನನು ಗೆಳತಿ..
ಹೋಗುವ ಮುನ್ನ ನೀ ಹೇಳಿಬಿಡು...
ಎದೆಯಂಗಳದಿ ನೂರು ಚುಕ್ಕಿಗಳನಿಟ್ಟು..
ರಂಗೋಲಿಯ ಮರೆತೆ ನೀ ಏಕೆ...??
ಬಾಳ ನೌಕೆಯ ಪ್ರೇಮ ಸಾಗರಕೆಳೆದು...
ಹುಟ್ಟನು ಕಸಿದೆ ನೀ ಏಕೆ...??
|| ಉರಿವ ಎದೆಯಲಿ ||
ಹೂದೋಟದಲಿ ನೀ ಹೂಗಳ ಚುಂಬಿಸಿ..
ಬೇರನೆ ಕಿತ್ತ ಪರಿಯದೇನು..??
ಮೂಖ ಹೃದಯಕೆ ಮಾತನು ಕಲಿಸಿ...
ನಾಲಿಗೆಯನೆ ಹರಿದೆ ಸರಿಯೇನು...??
|| ಉರಿವ ಎದೆಯಲಿ ||
ಹಣತೆಯ ಬೆಳಗಿಸಿ ನೀರನು ಸುರಿದೆ..
ಇನ್ನೆಲ್ಲಿ ಹುಡುಕಲಿ ನಾ ಬೆಳಕು...??
ನನ್ನ ಕವಿತೆಗಳ ಪದಗಳ ಕಸಿದೆ...
ಇನ್ನೆಲ್ಲಿಂದ ತರಲಿ ನಾ ಸರಕು...??
|| ಉರಿವ ಎದೆಯಲಿ ||
ಕಿವಿಯನು ತೆರೆದು ನೀ ಕೇಳಿಬಿಡು...
ಇನ್ನು ತಡೆಯೆ ನಾ ನಿನ್ನನು ಗೆಳತಿ..
ಹೋಗುವ ಮುನ್ನ ನೀ ಹೇಳಿಬಿಡು...
ಎದೆಯಂಗಳದಿ ನೂರು ಚುಕ್ಕಿಗಳನಿಟ್ಟು..
ರಂಗೋಲಿಯ ಮರೆತೆ ನೀ ಏಕೆ...??
ಬಾಳ ನೌಕೆಯ ಪ್ರೇಮ ಸಾಗರಕೆಳೆದು...
ಹುಟ್ಟನು ಕಸಿದೆ ನೀ ಏಕೆ...??
|| ಉರಿವ ಎದೆಯಲಿ ||
ಹೂದೋಟದಲಿ ನೀ ಹೂಗಳ ಚುಂಬಿಸಿ..
ಬೇರನೆ ಕಿತ್ತ ಪರಿಯದೇನು..??
ಮೂಖ ಹೃದಯಕೆ ಮಾತನು ಕಲಿಸಿ...
ನಾಲಿಗೆಯನೆ ಹರಿದೆ ಸರಿಯೇನು...??
|| ಉರಿವ ಎದೆಯಲಿ ||
ಹಣತೆಯ ಬೆಳಗಿಸಿ ನೀರನು ಸುರಿದೆ..
ಇನ್ನೆಲ್ಲಿ ಹುಡುಕಲಿ ನಾ ಬೆಳಕು...??
ನನ್ನ ಕವಿತೆಗಳ ಪದಗಳ ಕಸಿದೆ...
ಇನ್ನೆಲ್ಲಿಂದ ತರಲಿ ನಾ ಸರಕು...??
|| ಉರಿವ ಎದೆಯಲಿ ||
Thursday, 9 July 2009
ಹೀಗೊಂದು ಸಂಜೆ
ಅವಳೆದೆಯೊಳಗಡಿಯಿಡೊ ಘಳಿಗೆ...
ಬರ ಹೇಳಿಹೆ ತುಂತುರು ಮಳೆಗೆ..
ತೆರೆದಿರುವೆನು ಮುತ್ತಿನ ಮಳಿಗೆ..
ಬಂದರೆ ಕ್ಷಣ ಕ್ಷಣವೂ ರಸದೀವಳಿಗೆ...
ನೀ ತೋರದಿರೂ ಇಂದವಸರ...
ಮರೆಯಾಗದೆ ನಿಲ್ಲು ಓ ನೇಸರ...
ಬರಿ ಬಾನೆoದರೆ ಬಲು ಬೇಸರ..
ಮಳೆ ಬಿಲ್ಲಿಗೆ ಕೊಡು ತುಸು ಉಸಿರ...
ತಂಗಾಳಿಯೆ ಬೀಸು ನೀ ಮೆಲ್ಲ..
ಮುಂಗುರುಳ ನರ್ತನಕೆ ಬರಿ ಸೊಲ್ಲ..
ನಾಚಿ ಕೆಂಪಿಡುತಿರೆ ಸಖಿ ಗಲ್ಲ..
ಕದ್ದು ಮುತ್ತಿಡುವೆ ನಾ ಕಳ್ಳ...
ಬರ ಹೇಳಿಹೆ ತುಂತುರು ಮಳೆಗೆ..

ತೆರೆದಿರುವೆನು ಮುತ್ತಿನ ಮಳಿಗೆ..
ಬಂದರೆ ಕ್ಷಣ ಕ್ಷಣವೂ ರಸದೀವಳಿಗೆ...
ನೀ ತೋರದಿರೂ ಇಂದವಸರ...
ಮರೆಯಾಗದೆ ನಿಲ್ಲು ಓ ನೇಸರ...
ಬರಿ ಬಾನೆoದರೆ ಬಲು ಬೇಸರ..
ಮಳೆ ಬಿಲ್ಲಿಗೆ ಕೊಡು ತುಸು ಉಸಿರ...
ತಂಗಾಳಿಯೆ ಬೀಸು ನೀ ಮೆಲ್ಲ..
ಮುಂಗುರುಳ ನರ್ತನಕೆ ಬರಿ ಸೊಲ್ಲ..
ನಾಚಿ ಕೆಂಪಿಡುತಿರೆ ಸಖಿ ಗಲ್ಲ..
ಕದ್ದು ಮುತ್ತಿಡುವೆ ನಾ ಕಳ್ಳ...
Sunday, 21 June 2009
ಸಬೂಬು..!!
ಗಾಳಿಗೆ ತಂಪು
ಕೋಗಿಲೆಗೆ ದನಿಯ ಇಂಪು...
ಹೂಗಳಿಗೆ ಕಂಪು...
ನದಿಗೆ ಕಲರವ
ಸಾಗರಕೆ ಅಲೆಯ ಸ್ಪರ್ಶ
ಸೂರ್ಯ, ಚಂದ್ರ,
ತಾರೆಗಳಿಗೆಹೊಳಪು...
ನೀನೆ ಕಲಿಸಿರುವೆಯoತೆ...!!
ಅವುಗಳದ್ದು ಒಂದೇ ಪುಕಾರು...
ಗುರುದಕ್ಷಿಣೆ ಸ್ವೀಕರಿಸದೇ
ಬಂದಿರುವೆಯಂತೆ...??
ನಾನೀಗ ಅವುಗಳ ರಾಯಭಾರಿ...
ಸಾವಿರದ ಒಂದು ಮುತ್ತುಗಳನ್ನು
ನಿನಗೆ ಕಾಣಿಕೆಯಾಗಿ ನೀಡಿವೆ....
ಹೇಳು ಚೆಲುವೆ....
ಯಾವಾಗ ಕೊಡಲಿ......??
ಕೋಗಿಲೆಗೆ ದನಿಯ ಇಂಪು...
ಹೂಗಳಿಗೆ ಕಂಪು...
ನದಿಗೆ ಕಲರವ
ಸಾಗರಕೆ ಅಲೆಯ ಸ್ಪರ್ಶ
ಸೂರ್ಯ, ಚಂದ್ರ,
ತಾರೆಗಳಿಗೆಹೊಳಪು...
ನೀನೆ ಕಲಿಸಿರುವೆಯoತೆ...!!
ಅವುಗಳದ್ದು ಒಂದೇ ಪುಕಾರು...
ಗುರುದಕ್ಷಿಣೆ ಸ್ವೀಕರಿಸದೇ
ಬಂದಿರುವೆಯಂತೆ...??
ನಾನೀಗ ಅವುಗಳ ರಾಯಭಾರಿ...
ಸಾವಿರದ ಒಂದು ಮುತ್ತುಗಳನ್ನು
ನಿನಗೆ ಕಾಣಿಕೆಯಾಗಿ ನೀಡಿವೆ....
ಹೇಳು ಚೆಲುವೆ....
ಯಾವಾಗ ಕೊಡಲಿ......??
Subscribe to:
Posts (Atom)





