Monday, 7 December 2009
ಇನ್ವಿಸಿಬಲ್...!!!!
Posted by
Dileep Hegde
Labels:
Kannada Cartoon,
ಕನ್ನಡ ಕಾರ್ಟೂನ್,
ಕಾರ್ಟೂನ್ ಕಾರ್ನರ್ Cartoon Corner,
ವ್ಯಂಗ್ಯಚಿತ್ರ
17
comments

ಪರಿಹಾರ ನಿಧಿ
Posted by
Dileep Hegde
Labels:
Kannada Cartoon,
ಕನ್ನಡ ಕಾರ್ಟೂನ್,
ಕಾರ್ಟೂನ್ ಕಾರ್ನರ್ Cartoon Corner,
ವ್ಯಂಗ್ಯಚಿತ್ರ
5
comments

Sunday, 6 December 2009
ಬೆಲೆ ಏರಿಕೆ
Posted by
Dileep Hegde
Labels:
Kannada Cartoon,
ಕನ್ನಡ ಕಾರ್ಟೂನ್,
ಕಾರ್ಟೂನ್ ಕಾರ್ನರ್ Cartoon Corner,
ವ್ಯಂಗ್ಯಚಿತ್ರ
14
comments

Saturday, 5 December 2009
Thursday, 3 December 2009
ಕಳೆದು ಹೋಗಿದ್ದೇನೆ...!!
ಮಿತಿಯಿಲ್ಲದಂತೆ
ಮತ್ತನೇರಿಸುವ
ನಿನ್ನ ನೋಟದ ನಶೆ ಜಾಮಿನಲ್ಲಿ..
ಮೈ-ಮನದ ತುಂಬ
ಕುಣಿದೆದ್ದು ಸಂಚರಿಸಿದ
ಭಾವನೆಗಳ ಟ್ರಾಫಿಕ್ ಜಾಮಿನಲ್ಲಿ..
ಮನದ ಮಳಿಗೆಯಲಿ
ಒಪ್ಪವಾಗಿ ಜೋಡಿಸಿಟ್ಟ
ನಿನ್ನ ನೆನಪ ಸರಂಜಾಮಿನಲ್ಲಿ..
ಮಿಲನವೋ-ಅಗಲಿಕೆಯೊ
ಜೀವನವೋ-ಮರಣವೋ
ತಿಳಿಯದ ಅಂಜಾಮಿನಲ್ಲಿ...
ಕಳೆದು ಹೋಗಿದ್ದೇನೆ...!
ಬರುವುದೋ ಬಿಡುವುದೋ
ನಿರ್ಧಾರ ನಿನಗೆ ಬಿಟ್ಟಿದ್ದು...
ಹೋಗುವ ಮುನ್ನ
ನಿನ್ನೆದೆಯ ಪುಟಗಳಲಿ
ನನ್ನ ವಿಳಾಸ
ಬರೆದು ಹೋಗಿದ್ದೇನೆ...!!
ಚಿತ್ರ ಕೃಪೆ : ಅಂತರ್ಜಾಲ
Wednesday, 25 November 2009
55 ಪದಗಳ ಕಥೆ.. 55 Word Fiction..
ಇಂಗ್ಲಿಷ್ ನಲ್ಲಿ 55 Word Fiction ತುಂಬಾ ಪ್ರಖ್ಯಾತ.. ಕೇವಲ 55 ಪದಗಳಲ್ಲಿ ಒಂದು ಕಥೆಯನ್ನು ಹೇಳೋ ಈ ಕಥಾ ಪ್ರಾಕಾರ ಯಾಕೋ ಇಷ್ಟವಾಯಿತು... ಕನ್ನಡದಲ್ಲೂ ಯಾಕೆ ಪ್ರಯತ್ನಿಸಬಾರದು ಅಂತ ಅನ್ನಿಸಿತು... ಇದು ನನ್ನ ಮೊದಲ ಪ್ರಯತ್ನ... ಹೇಗಿದೆ..? ಹೇಳ್ತೀರಾ ಅಲ್ವಾ...???
ಶಿಲಾ ಬಾಲಿಕೆ

ಅವನು ಒಬ್ಬ ಶಿಲ್ಪಿ.. ಕಲ್ಲಿನಲ್ಲಿ ಜೀವ ತುಂಬಬಲ್ಲ ಚತುರ... ಅವಳೋ ಅಪ್ಸರೆಯೇ ನಾಚಬೇಕು.. ಅಷ್ಟು ಸುಂದರಿ... ಈತ ಅವಳ ಚೆಲುವಿಗೆ ಮನಸೋತ... ಅವಳು ಇವನ ಕಲೆಗೆ ಸೋತು ಹೃದಯ ಒಪ್ಪಿಸಿದಳು.... ಇವಳ ಮೂರ್ತಿಯನ್ನೇ ಆತ ಕೆತ್ತತೊಡಗಿದ... ಹಗಲು-ಇರುಳು.. ಬಿಸಿಲು-ಮಳೆ.. ಯಾವುದನ್ನೂ ಲೆಕ್ಕಿಸದೆ ಕಲ್ಲು ಕಡೆಯುವುದರಲ್ಲಿ ಮಗ್ನನಾದ...ದಿನ..ವಾರ.. ತಿಂಗಳು.. ವರ್ಷಗಳೇ ಗತಿಸಿದವು... ಅವಳ ಸುಂದರ ಪ್ರತಿಕೃತಿ ತಯಾರಾಯಿತು... ಅವಳು ಇವನಿಗಾಗಿ ಕಾದು ಕಾದು ಸುಸ್ತಾದಳು.. ನೊಂದಳು... ವಿರಹದ ಬೇಗೆಯಲ್ಲಿ ಬೆಂದಳು... ಕಲ್ಲಾಗಿ ಹೋದಳು...!!
ಚಿತ್ರ ಕೃಪೆ : ಅಂತರ್ಜಾಲ..
Thursday, 19 November 2009
ನನ್ನ ಕಣ್ಣೀರಿಗೆ ಬೆಲೆ ಸಿಕ್ಕಿದೆ...!!
ನಾ ಬೇಡ ಎಂದರೂ
ಬೇಗೆಯಲಿ ಬೆಂದು ನೊಂದರೂ..

ನೀ ತೊರೆದೆ ನನ್ನ ಒಡಲು...
ಕಣ್ಣುಗಳಲಿ ಮೂಡಿದ್ದು
ನೀನಂದುಕೊಂಡಂತೆ
ಬರೀ ಒರತೆಯಲ್ಲ...
ಅದು ಕೊನೆಯಿರದ ಕಡಲು...
ಕುಂತಲ್ಲಿ.. ನಿಂತಲ್ಲಿ..
ಹೋದಲ್ಲಿ.. ಬಂದಲ್ಲಿ...
ಅತ್ತೆ... ಮತ್ತೆ.. ಮತ್ತೆ... ಅತ್ತೆ..
ಆ ಒಣ ಮರವನ್ನೂ ತಬ್ಬಿ ಅತ್ತಿದ್ದೆ...
ಅದರಲ್ಲೀಗ ಹೊಸ ಚಿಗುರು...
ಹೊಸ ಹಸಿರು ಮೂಡಿದೆ...
ನನ್ನ ಕಣ್ಣೀರಿಗೆ ಬೆಲೆ ಸಿಕ್ಕಿದೆ...!!
Tuesday, 17 November 2009
ಕನ್ನಡಪ್ರಭದಲ್ಲಿ ಹನಿ ಹನಿ...!!
ಕನ್ನಡ ಪ್ರಭದ ಅಂತರ್ಜಾಲ ತಾಣದಲ್ಲಿ ಬ್ಲಾಗಾಯಣ ಶೀರ್ಷಿಕೆಯಡಿ ಬ್ಲಾಗ್ ಒಂದನ್ನು ಪರಿಚಯಿಸಲಾಗುತ್ತಿದೆ ಮತ್ತು ಆ ಬ್ಲಾಗ್ ನ ಒಂದು ಪ್ರಕಟಣೆಯನ್ನು ಅಲ್ಲಿ ಪ್ರಕಟಿಸಲಾಗುತ್ತದೆ... ಖುಷಿ ವಿಚಾರ ಅಂದ್ರೆ ನನ್ನ ಹನಿ ಹನಿ ಬ್ಲಾಗ್ ಬಗ್ಗೆ ಆಗಸ್ಟ್ ೮ ರ ಸಂಚಿಕೆಯಲ್ಲೇ ಪ್ರಕಟಿಸಲಾಗಿದೆ.. ಅಂತರ್ಜಾಲದಿಂದ ಸ್ವಲ್ಪ ದಿನ ದೂರವಿದ್ದದ್ದರಿಂದ ಇದು ನನ್ನ ಗಮನಕ್ಕೆ ಬಂದಿರಲಿಲ್ಲ... (ಇದಕ್ಕೆ ನನ್ನ ಅತಿಯಾದ ಆಲಸ್ಯವಲ್ಲದೆ ಮತ್ತೇನೂ ಕಾರಣವಿಲ್ಲ..) ಇಂದು ಇದನ್ನು ಗಮನಿಸಿದೆ.. ಖುಷಿಯಾಗಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ .. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನನ್ನ ಬ್ಲಾಗಿನ ಮೇಲಿರಲಿ....
ಹನಿ ಹನಿಯ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗಿರೋದರ ಕೊಂಡಿ ....
http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20090808011417&nDate=
Saturday, 14 November 2009
ಇದೀಗ ಬಂದ ಸುದ್ದಿ...!!
.jpg)
ಪ್ರತಿ ಪುಟದಲ್ಲೂ ತುಂಬಿ ತುಳುಕುವ ಸರಕು
ನಮ್ಮ ವಿಶೇಷ ವರದಿ, ಮೇಲಿಂದ ಬಹುಪರಾಕು..!
ಕೊಲೆ ಸುಲಿಗೆ ರಾದ್ದಾಂತ...
ಕಳ್ಳ ಸ್ವಾಮಿಯ ಪೊಳ್ಳು ವೇದಾಂತ...
ರಾಜಕೀಯದವರ ದೊಂಬರಾಟ..
ಭಯೋತ್ಪಾದಕರ ಹಾರಾಟ..
ಕ್ರಿಕೆಟ್ಟಿನವರ ಜೂಜಾಟ..
ಅಸ್ತಮಾ, ಮೂಲವ್ಯಾದಿಗೆ ಹೊಸ ಮದ್ದು...
ನಾಲ್ಕೇ ದಿನದಲ್ಲಿ ಬೊಕ್ಕ ತಲೆ
ಮೇಲೆ ಮಾರುದ್ದದ ಕೇಶರಾಶಿ...!
ಹಾಸಿಗೆ ಸುಖಕ್ಕಾಗಿ ಶಕ್ತಿಶಾಲಿ ಗುಳಿಗೆ..!!
ಪುಟದ ತುಂಬಾ ಅರೆಬೆತ್ತಲೆ ಬಾಲೆ...
ಬಡವರ ಬವಣೆಗೆ ಮಾತ್ರ ಸಿಗದ ಬೆಲೆ...
ಇದೆಲ್ಲದರ ನಡುವೆ...
ಇದೀಗ ಬಂದ ಸುದ್ದಿ...
ಇಂದಿನ ನ್ಯೂಸ್ ಪೇಪರ್
ನಾಳಿನ ರದ್ದಿ...!!
Wednesday, 11 November 2009
ಮಹಾಪ್ರಳಯ...!!! (ಪೋಲಿಸ್ ನ್ಯೂಸ್ ನಲ್ಲಿ ಪ್ರಕಟಿತ)
ಜಗತ್ತಿನೆಲ್ಲೆಡೆ ಈಗ 2012 ರಲ್ಲಿ ಪ್ರಳಯವಾಗಿ ಭೂಮಿ ಸರ್ವನಾಶವಾಗುತ್ತದೆ ಎನ್ನುವ ಬಗ್ಗೆ ಗುಲ್ಲೆದ್ದಿದೆ... ಈ ಬಗ್ಗೆ ವಿಶೇಷ ವರದಿಗಳು ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ , ದೂರದರ್ಶನ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿವೆ.. ಹಾಗೆಯೇ ಈ ಕುರಿತು ಭಾರಿ ಬಜೆಟ್ ನ ಹಾಲಿವುಡ್ ಚಲನಚಿತ್ರವೊಂದು ಕೂಡಾ ಬಿಡುಗಡೆಯಾಗಿದೆ.. ಇದೇ ವಿಷಯದ ಬಗ್ಗೆ ಪೋಲಿಸ್ ನ್ಯೂಸ್ ಪತ್ರಿಕೆಗಾಗಿ ಮಿತ್ರ ವಿನಯ್ ಭಟ್ ರವರ ಜೊತೆಗೂಡಿ ಬರೆದ ಚಿಕ್ಕ ಪುಸ್ತಕವೊಂದರ ಪ್ರತಿಯನ್ನು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ... ಓದಿ... ಪ್ರತಿಕ್ರಿಯಿಸಿ... :)
















(ಕೃಪೆ: ಪೋಲಿಸ್ ನ್ಯೂಸ್ )
Subscribe to:
Posts (Atom)