ಬಯಸೆ ನಾನು ಎಂದಿಗು
ದೊಡ್ಡ ಜನರ ಗೆಳೆತನ...
ಅಳತೆಗೋಲು ಆಗದು
ಸ್ನೇಹಕ್ಕೆ ಪದವಿ ಸಿರಿತನ..
ಬೊಗಸೆಯೊಡ್ಡಿ ಬೇಡುವೆ
ಹರಸು ದೇವ ಅನುದಿನ..
ಸ್ನೇಹಿತರ ಬಾಳು ಬೆಳಗಲಿ,
ಸಿಗಲಿ ಕೀರ್ತಿ ಹಿರಿತನ..
ನೋವ ಮರೆಸಿ ನಲಿವ ಬಲವ
ಸ್ನೇಹ ತುಂಬಿ ಕೊಡುವುದು...
ಸೋಲಿನಲ್ಲು ಗೆಲುವ ಛಲವ
ಸ್ನೇಹ ಹೊತ್ತು ತರುವುದು...
ಶುದ್ದ ಸ್ನೇಹವಿರುವ ಕಡೆಗೆ
ಸ್ವಾರ್ಥವೆಂದು ಸುಳಿಯದು...
ಉಸಿರು ಇರುವವರೆಗು ಜೊತೆಗೆ
ಸ್ನೇಹವೊಂದೆ ಉಳಿವುದು...
ಜಾತಿಮತ ಮೇಲುಕೀಳು
ಸ್ನೇಹವೆಂದೂ ಕೇಳದು..
ಊರುಕೇರಿ ವೇಷಭಾಷೆ
ಸ್ನೇಹಕೆಂದೂ ಕಾಣದು...
ಅಸೂಯೆಈರ್ಷ್ಯೆ ಭೇದಭಾವ
ಸ್ನೇಹವೆಂದೂ ತೋರದು..
ಹೊನ್ನುಮಣ್ಣು ಆಸ್ತಿಪಾಸ್ತಿ
ಸ್ನೇಹವೆಂದೂ ಬೇಡದು...
ನೂರು ಕಹಿಯ ಮರೆಸುವಂತ
ಸ್ನೇಹಶಕ್ತಿ ಅದ್ಬುತ..
ಸಾವಗೆಲುವ ಶಕ್ತಿಯೀವ
ಸ್ನೇಹವೊಂದು ಅಮೃತ..
ಭೂಮಿಬಾನ ನಡುವ ಬಂಧ
ಸ್ನೇಹದಿಂದ ಪ್ರೇರಿತ...
ನಾಲ್ಕು ದಿನದ ಬಾಳಿನಲ್ಲಿ
ಸ್ನೇಹವೊಂದೆ ಶಾಶ್ವತ..
No comments:
Post a Comment