Wednesday 13 October 2010

ಹಾರದೀಗ ನಿದಿರೆ..!!




ಹುಣ್ಣಿಮೆಯ ರಾತ್ರಿಯಲಿ
ಚೊಂಬುಗೆನ್ನೆಯ ತುಂಬು ಚಂದ್ರನ
ಒಲಿಸಲು ತಾರೆಗಳು ಜಮಾಯಿಸಿದರೆ
ನನ್ನ ನಿದಿರೆಗೆ ಗರಿ ಮೂಡುತ್ತದೆ...

ಕಣ್ಣ ಕೋಟೆಯ ದಾಟಿ
ಗುರಿಯ ಹಂಗನು ಮೀರಿ
ದಣಿಯದೆ ಮನ ತಣಿಯದೆ
ದೂರ ದೂರಕೆ ಹಾರುತ್ತದೆ

ಒಳ್ಳೆಯದೇ ಆಯ್ತು..
ನೀನು ತೆಕ್ಕೆಗೆಳೆದು ರೆಕ್ಕೆಗಳ ಕಡಿದೆ..

ನಿನ್ನ ಬಾಹು ಬಂಧನದಲ್ಲೀಗ
ನನ್ನ ಕಣ್ಣುಗಳಿಗೆ ಸುಖನಿದ್ರೆ..

38 comments:

  1. ದಿಲೀಪ,
    ತುಂಬ romantic ಕವನ. ಕಾಲ್ಪನಿಕವೊ ಅಥವಾ.....?

    ReplyDelete
  2. ನಮಸ್ತೆ ಸುನಾಥ್ ಸರ್...
    ವಾಸ್ತವಕ್ಕೆ ಸಣ್ಣದೊಂದು ಕಾಲ್ಪನಿಕತೆಯ ಸ್ಪರ್ಶ ಕೊಡೊ ಪ್ರಯತ್ನ ಅಷ್ಟೇ.. ನನ್ನ ಪ್ರಯತ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  3. ಆಹಾ , ಓಹೋ . . . ಸೂಪರ್
    most of the Time, ಗುರಿಯನ್ನ ತಲುಪುವುದು ಅಂತಿಮ ನಿರ್ಧಾರವಾಗುತ್ತದೆ.
    ನೀವು "ಗುರಿಯ ಹಂಗನು ಮೀರಿ " ಅಂತ ಹೇಳಿದ್ರಲ್ಲ, Beautiful . . .

    ReplyDelete
  4. ದಿಲೀಪ್ ಕವಿತೆ ರೋಮಾಂಟಿಕಾಗಿ ಚೆನ್ನಾಗಿದೆ

    ReplyDelete
  5. ದಿಲೀಪ್;ತುಂಬಾ ಇಷ್ಟ ಆಯಿತು .ಕವಿತೆ ಭಾವಪೂರ್ಣವಾಗಿದೆ.

    ReplyDelete
  6. super dileep. sada sukha nidreyalliri

    ReplyDelete
  7. "ಕಣ್ಣ ಕೋಟೆಯ ದಾಟಿ
    ಗುರಿಯ ಹಂಗನು ಮೀರಿ
    ದಣಿಯದೆ ಮನ ತಣಿಯದೆ
    ದೂರ ದೂರಕೆ ಹಾರುತ್ತದೆ"..... ಸುಂದರ ಸಾಲುಗಳು.. ಇಷ್ಟವಾಯಿತು ದಿಲೀಪ್

    ಶ್ಯಾಮಲ

    ReplyDelete
  8. ದಿಲೀಪ್,

    ನಿಮ್ಮ ಈಗಿನ ಸಂದರ್ಭದಲ್ಲಿ ಇಂಥ ರೊಮ್ಯಾಂಟಿಕ್ ಕವನ ತುಂಬಾ ಚೆನ್ನಾಗಿ ಬರೆದಿದ್ದೀರಿ..

    ReplyDelete
  9. ದಿಲೀಪ್ ಸೊಗಸಾದ ಕವನ...ಸುಖ ನಿದ್ದೆ ನಿಮಗೆ ಬರಲಿ..

    ReplyDelete
  10. ದಿಲೀಪ್,
    ಕವನ ತುಂಬಾ ರೊಮ್ಯಾಂಟಿಕ್ ಆಗಿದೆ. ಇದರ ಹಿಂದಿನ ರಹಸ್ಯವೇನು???
    ಸೂಪರ್......

    ReplyDelete
  11. ದಿಲೀಪ್ ,
    ರಾಶಿ ಚಂದ ಇದ್ದು . ಈ ತರದ ಸುಖ ನಿದ್ರೆಯಿಂದ ಆಗಾಗ ಎದ್ದು ಚಂದದ ಕವನಗಳನ್ನು ಬರೀತಾ ಇರಿ !

    ReplyDelete
  12. ನಾಗರಾಜ್
    ಇಲ್ಲಿ ನಿದ್ರೆಗೆ ಗರಿ ಮೂಡಿದೆ.. ಮನಸೋ ಇಚ್ಛೆ ಹಾರಾಡ್ತಿದೆ.. ಗುರಿ ತಲುಪುವ ಯಾವುದೇ ಇರಾದೆ ಅದಕ್ಕಿಲ್ಲ.. ಅವಳು ತೆಕ್ಕೆಗೆಳೆದು ರೆಕ್ಕೆ ಕತ್ತರಿಸಿದಾಗಲೇ ನಿದ್ರೆಯ ಸ್ವೇಚ್ಚೆಗೆ ಕಡಿವಾಣ..
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. :)

    ReplyDelete
  13. ದೇಸಾಯಿ ಸರ್..
    ಚಿಕ್ಕ ಪ್ರಯತ್ನ ಅಷ್ಟೇ.. ರೋಮ್ಯಾಂಟಿಕ್ ಆಗಿದೆ ಮತ್ತು ನಿಮಗೆಲ್ಲ ಇಷ್ಟವಾಗಿದೆ ಅಂತಾದ್ರೆ ನನಗಷ್ಟೇ ಖುಷಿ.. ಧನ್ಯವಾದಗಳು..

    ReplyDelete
  14. ಕೃಷ್ಣಮೂರ್ತಿ ಸರ್..
    ನಿಮ್ಮೆಲ್ಲರ ಪ್ರೋತ್ಸಾಹ, ಹಾರೈಕೆಗಳೇ ಇಂತಹ ಇನ್ನಷ್ಟು ಭಾವಪೂರ್ಣ ಕವನ ಬರೆಯಲು ಸ್ಫೂರ್ತಿ.. ಧನ್ಯವಾದಗಳು..

    ReplyDelete
  15. ಚುಕ್ಕಿ ಚಿತ್ತಾರ
    thanks a lot.. :)

    ReplyDelete
  16. ಮನಸು..
    ಹೌದು.. ನಿದ್ರೆಯ ಸುಖದ ಗಮ್ಮತ್ತೆ ಬೇರೆ... ತಮ್ಮ ಹಾರೈಕೆಗೆ ಧನ್ಯವಾದಗಳು..

    ReplyDelete
  17. ಶ್ಯಾಮಲ ಮೇಡಂ..
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  18. ಶಿವಣ್ಣ...
    ನೀವು ಹೇಳಿದ್ದು ಸರಿ.. ಈಗೀಗ ಇದೇ ತರದ ಕವನಗಳನ್ನ ಬರೆಯೋಣಾ ಅಂತ ಅನಿಸೋದು ಜಾಸ್ತಿಯಾಗಿದೆ.. ಸಂದರ್ಭ ದೋಷ ಅಂತೀರಾ..? ಹಹಹ.. ಧನ್ಯವಾದಗಳು..

    ReplyDelete
  19. ಶಿವಣ್ಣ...
    ನೀವು ಹೇಳಿದ್ದು ಸರಿ.. ಈಗೀಗ ಇದೇ ತರದ ಕವನಗಳನ್ನ ಬರೆಯೋಣಾ ಅಂತ ಅನಿಸೋದು ಜಾಸ್ತಿಯಾಗಿದೆ.. ಸಂದರ್ಭ ದೋಷ ಅಂತೀರಾ..? ಹಹಹ.. ಧನ್ಯವಾದಗಳು..

    ReplyDelete
  20. ಪ್ರವೀಣ್..
    ಅಂತಾ ರಹಸ್ಯ ಏನೂ ಇಲ್ಲಾ ಅಂದ್ರೆ ನೀವು ನಂಬೊಲ್ಲ... ಪ್ರಕಾಶಣ್ಣ ನಿಮ್ಮೆಲ್ಲರ ಕಲ್ಯಾಣ ಮಾಡುವ ಪಣ ತೊಟ್ಟಿದ್ದಾರೆ ಅಂತ ಗೊತ್ತಾಯ್ತು.. ಅದಾದ ಮೇಲೆ ಗೊತ್ತಾಗತ್ತೆ ರಹಸ್ಯ... ಅಲ್ಲಿವರೆಗೂ ಸ್ವಲ್ಪ ತಾಳ್ಮೆ ಇರಲಿ.. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  21. ಚಿತ್ರಕ್ಕ..
    ಹಹಹ.. ಈಗೀಗ ನಿದ್ದೆ ಸಲ್ಪ ಜಾಸ್ತಿನೆ ಆಗೋತೇನ ಕಾಣ್ತು. ಬ್ಲಾಗಿನ್ ಬಾಗ್ಲು ತೆಗ್ಯದೆ ಕಮ್ಮಿ ಆಗೋಯ್ದು.. ನೀವ್ ಹೇಳ್ದಂಗೆ ಬರ್ಯಲೆ ಪ್ರಯತ್ನ ಮಾಡ್ತಿ.. ಕವನ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್..

    ReplyDelete
  22. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ವಸಂತ್..

    ReplyDelete
  23. ನಿನ್ನ ಬಾಹು ಬಂಧನದಲ್ಲೀಗ
    ನನ್ನ ಕಣ್ಣುಗಳಿಗೆ ಸುಖನಿದ್ರೆ..
    ಸಾಲುಗಳು ಚೆನ್ನಾಗಿವೆ,ಇಷ್ಟವಾಯ್ತು.
    ಸುಮಧುರ ಭಾವನೆಗಳು ಸೊಗಸಾಗಿ ಮೂಡಿಬಂದಿದೆ.
    ಅಭಿನಂದನೆಗಳು.

    ReplyDelete
  24. ದಿಲೀಪ್,
    ಸುಂದರ, ಭಾವಪೂರ್ಣ, ರೋಮ್ಯಾಂಟಿಕ್ ಕವನ, ಇಷ್ಟ ಆಯಿತು....

    ReplyDelete
  25. ಸಕತ್ ರೋಮಾಂಟಿಕ್ ಕವನ ಸರ್

    ತುಂಬಾ ಇಷ್ಟ ಆಯಿತು

    ಮೊದಲ ಪ್ಯಾರ ಸೂಪರ್

    ReplyDelete
  26. ನಿಮ್ಮ ಹಿಂದಿನ ಪೋಷ್ಟಿಗೂ ಈ ಕವನಕ್ಕೂ ಏನೋ ಸಂಬಂಧ ಇದ್ದ ಹಾಗೆ ಇದೆ!!!!
    ಹ ಹಾ..

    ReplyDelete
  27. ವೆಂಕಟಕೃಷ್ಣ ಸರ್
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು....

    ReplyDelete
  28. ಅಶೋಕ್ ಸರ್..
    ಧನ್ಯವಾದಗಳು

    ReplyDelete
  29. ಗುರುಮೂರ್ತಿ ಸರ್
    ನೀವು ಬರೆದಿರೋ ಕವನ ಅದ್ಭುತ.. ಓದಿ ತುಂಬಾ ಖುಷಿ ಆಯ್ತು..
    ನನ್ನ ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  30. ಬಾಲು ಸರ್..
    ಹಹಹ.. ಸರಿಯಾಗಿ ಲಿಂಕಿಸಿದ್ದೀರಿ...!!
    ನಿಮ್ಮ 40GB ಫೋಟೋಗಳಲ್ಲಿ ಆದಷ್ಟು ಬೇಗ ಕೆಲವು ನಮ್ಮ ದರ್ಶನಕ್ಕೆ ಲಭ್ಯವಾಗಲಿ.. ಹನಿಹನಿಗೆ ಆಗಾಗ ಬರುತ್ತಿರಿ...

    ReplyDelete
  31. dileepanna kavana super :)

    ನಿನ್ನ ಬಾಹು ಬಂಧನದಲ್ಲೀಗ
    ನನ್ನ ಕಣ್ಣುಗಳಿಗೆ ಸುಖನಿದ್ರೆ.. wah :)

    ReplyDelete
  32. 'ನೀನು ತೆಕ್ಕೆಗೆಳೆದು ರೆಕ್ಕೆಗಳ ಕಡಿದೆ..' ಬ೦ಧನದಲ್ಲೂ, ಸ್ವಾತ೦ತ್ರ್ಯ ರಾಹಿತ್ಯದಲ್ಲೂ, ಸುಖವನರಸುವ ಮನಸು! ಕವನ ಭಾವಪೂರ್ಣ
    ಹಾಗೂ ಅರ್ಥಪೂರ್ಣವಾಗಿದೆ. ನನ್ನ ಬ್ಲಾಗ್ ಗೊಮ್ಮೆ ಬನ್ನಿ.

    ReplyDelete
  33. ರಸಮಯ ಕವನ. ಕೊನೆಯ ಸಾಲುಗಳು ಅರ್ಥಪೂರ್ಣ.

    ReplyDelete
  34. ಒಳ್ಳೆಯದೇ ಆಯ್ತು..
    ನೀನು ತೆಕ್ಕೆಗೆಳೆದು ರೆಕ್ಕೆಗಳ ಕಡಿದೆ..
    .... romantic kavite... bhaavada neera nudi .... tumbaa chennagide

    ReplyDelete
  35. ರಂಜಿತಾ, ಪ್ರಭಾಮಣಿ ಮೇಡಂ, ಸೀತಾರಾಮ್ ಸರ್, ಚಂದ್ರಿಕಾ ಮೇಡಂ, ವೀ, ಆರ್, ಭಟ್ ಸರ್.. ಎಲ್ಲರಿಗೂ ಧನ್ಯವಾದಗಳು..

    ReplyDelete