Thursday 19 November 2009

ನನ್ನ ಕಣ್ಣೀರಿಗೆ ಬೆಲೆ ಸಿಕ್ಕಿದೆ...!!



ನಾ
ಬೇಡ ಎಂದರೂ

ಬೇಗೆಯಲಿ
ಬೆಂದು ನೊಂದರೂ..

ನೀ ತೊರೆದೆ ನನ್ನ ಒಡಲು...
ಕಣ್ಣುಗಳಲಿ
ಮೂಡಿದ್ದು

ನೀನಂದುಕೊಂಡಂತೆ
ಬರೀ
ಒರತೆಯಲ್ಲ...
ಅದು
ಕೊನೆಯಿರದ ಕಡಲು...
ಕುಂತಲ್ಲಿ.. ನಿಂತಲ್ಲಿ..
ಹೋದಲ್ಲಿ
.. ಬಂದಲ್ಲಿ...

ಅತ್ತೆ
... ಮತ್ತೆ.. ಮತ್ತೆ... ಅತ್ತೆ..


ಆ ಒಣ ಮರವನ್ನೂ ತಬ್ಬಿ ಅತ್ತಿದ್ದೆ...
ಅದರಲ್ಲೀಗ
ಹೊಸ ಚಿಗುರು...

ಹೊಸ ಹಸಿರು ಮೂಡಿದೆ...

ನನ್ನ
ಕಣ್ಣೀರಿಗೆ ಬೆಲೆ ಸಿಕ್ಕಿದೆ...!!

27 comments:

  1. ಒಣ ಮರವನ್ನು ಚಿಗುರಿಸುವಲ್ಲಿ ನಿಮ್ಮ ಕಣ್ಣೀರು ಸಾರ್ಥಕವಾಯಿತು, ತನ್ನ ಬೆಲೆಯನ್ನು ಪಡೆಯಿತು. ವಾಹ್! ಇದು ಸೊಗಸಾದ ಭಾವನೆ!

    ReplyDelete
  2. ona maradalli hosa chiguru........... wonderful imagination.

    ReplyDelete
  3. plz...albedi...tumba chennagi bardidira...inmel albedi...

    ReplyDelete
  4. ತುಂಬಾ ಸುಂದರವಾಗಿದೆ ಕವನ. ನಿಮ್ಮ ಕಣ್ಣೀರಿನಲ್ಲೂ ಪ್ರೇಮದ ಅದ್ಭುತ ಶಕ್ತಿಯಿದೆ ಅಂತಾಯ್ತು . ಒಣಮರವನ್ನೂ ಚಿಗುರಿಸಿದೆ !

    ReplyDelete
  5. ಒಳ್ಳೆಯ ಕಲ್ಪನೆ... ಕೊನೆಯಿರದ ಕಡಲು ಕಣ್ಣೀರು... ಒಮ್ಮೆ ಅತ್ತರೆ ಮನಸ್ಸಿಗೆ ಸ್ವಲ್ಪ ಸಮಾಧಾನವಾಗುತ್ತೆ ಅಲ್ವ?....
    ನಿಮ್ಮವ,
    ರಾಘು.

    ReplyDelete
  6. ಅದೆಷ್ಟು ಕಣ್ಣೀರು ಹಾಕಿರಬೇಡ ನೀವು ದಿಲೀಪ್... :p
    ಕನಸಿನ ಮರದಲ್ಲಿ ಹೂ ಬಿಡಲಿ

    ReplyDelete
  7. ಸುನಾಥ್ ಸರ್..
    ಕಣ್ಣೀರು ವ್ಯರ್ಥವಾಗಲಿಲ್ಲ ಎನ್ನುವ ಧನ್ಯತೆ... ನೋವಿನಲ್ಲೂ ಖುಶಿ ಕೊಡುತ್ತದೆ..
    ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete
  8. ತೇಜಸ್ವಿನಿ ಮೇಡಮ್..
    ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್..

    ReplyDelete
  9. ನನ್ನೊಳಗಿನ ನಾನು..
    ಹನಿ ಹನಿಯ ಅಂಗಳಕ್ಕೆ ಸ್ವಾಗತ..
    Imagination ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  10. ಜ್ಯೋತಿ..
    ಹಹ... ಅಳೋದು, ನಗೋದು ನಮ್ಮ ಕೈನಲ್ಲಿ ಇಲ್ಲ.. ಪರಿಸ್ಥಿತಿಯ ಕೈಗೊಂಬೆಗಳು ನಾವು...
    ಆದರೆ, ಇದು ನಾನು ಅತ್ತಿದ್ದಲ್ಲ.. ಕಲ್ಪನೆಯಷ್ಟೇ...
    ಪ್ರತಿಕ್ರಿಯೆಗಳಿಗಾಗಿ ತುಂಬಾ ತುಂಬಾ ಥ್ಯಾಂಕ್ಸ್...

    ReplyDelete
  11. ಚಿತ್ರಾ ಮೇಡಮ್..
    ಕಣ್ಣೀರಿನಲ್ಲೂ ಅಂತ ಶಕ್ತಿಯಿದೆ ಅನ್ನೋದನ್ನ ಕಲ್ಪಿಸಿಕೊಂಡು ಕವನ ಬರೆದೆ...
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  12. ರಘು..
    ನಿಜ...ಸ್ವಲ್ಪ ಅತ್ತರೆ ಮನಸ್ಸಿಗೆ ಸಮಾಧಾನ ಆಗುತ್ತದೆ.. ಆದರೆ ಜಾಸ್ತಿ ಅತ್ತರೆ ಮನಸ್ಸು ಇನ್ನೂ ಘಾಸಿಗೊಳ್ಳುತ್ತದೆ...
    ನೋವಿನಲ್ಲಿದ್ದರೂ ಮುಂದೆ ಹೊಸ ಬೆಳಕು ಮೂಡಬಹುದು ಅನ್ನೋ ಭರವಸೆಯಿದ್ದರೆ ಅಳುವ ಅಗತ್ಯವೇ ಇಲ್ಲ.. ಏನಂತೀರಿ..??
    ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್...

    ReplyDelete
  13. ಮಹೇಶ್ ಸರ್...
    ಪ್ರತಿಕ್ರಿಯೆಗಾಗಿ ಅನಂತ ಧನ್ಯವಾದಗಳು..

    ReplyDelete
  14. ಆನಂದ...
    ಕಣ್ಣೀರು ನಾನು ಹಾಕಿದ್ದಲ್ಲ ಕಣ್ರೀ... ಸುಮ್ಮನೇ ಹಾಗೆ ಕಲ್ಪಿಸಿಕೊಂಡೆ ಅಷ್ಟೇ..
    ಹಾರೈಕೆಗೆ ಹಾಗೂ ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. :)

    ReplyDelete
  15. ಚೆನ್ನಾಗಿದೆ, ಕೊನೆಯ ಪ್ಯಾರಾ ಮಾತ್ರ ಪ್ಯಾರಾ ಪ್ಯಾರಾ!!

    ReplyDelete
  16. Tumbaa tumbaa chennagide Dileep..keep writing..

    ReplyDelete
  17. ದಿಲೀಪ್,

    ಒಣಮರವನ್ನು ಚಿಗುರಿಸುವ ನಿಮ್ಮ ಕಣ್ಣೀರು ಚೆನ್ನಾಗಿದೆ. ಆದ್ರೆ ಅರ್ದ ಯಾಕೆ ಚಿಗುರಿದೆ.,

    ReplyDelete
  18. ಸೊಗಸಾದ ಕವನ
    ಸುಂದ ಫೋಟೋ ಇರುವುದರಿಂದ ಇನ್ನಷ್ಟು ಮೆರಗು ಕವನಕ್ಕೆ

    ReplyDelete
  19. ಚಕೋರ..
    ನಿಮ್ಮ ಪ್ಯಾರಾ ಪ್ಯಾರಾ ಪ್ರತಿಕ್ರಿಯೆಗಳೇ ಇನ್ನಷ್ಟು ಬರೆಯಲು ಸ್ಪೂರ್ತಿ..
    ಧನ್ಯವಾದಗಳು.. :)

    ReplyDelete
  20. ಚೇತನಾ..
    ತುಂಬಾ ತುಂಬಾ ಥ್ಯಾಂಕ್ಸ್.. ತಮ್ಮೆಲ್ಲರ ಪ್ರತಿಕ್ರಿಯೆ, ಪ್ರೋತ್ಸಾಹ ಸಿಗ್ತಾ ಇದ್ರೆ ಖಂಡಿತಾ..
    ಧನ್ಯವಾದಗಳು...

    ReplyDelete
  21. ಗೌತಮ್..
    ಥ್ಯಾಂಕ್ಸ್ ತಮ್ಮಣ್ಣಾ... ಪುರ್ಸೊತ್ತಿದ್ದಾಗೆಲ್ಲ ಬತ್ತಾ ಇರೋ.. :)

    ReplyDelete
  22. ಮಲ್ಲಿಕಾರ್ಜುನ್ ಸರ್..
    ಇಷ್ಟ ಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..

    ReplyDelete
  23. ಶಿವು ಸರ್...
    ಒಣ ಮರ ಚಿಗುರ್ತಾ ಇರೋದನ್ನು ಬಿಂಬಿಸುವ ಚಿತ್ರ ಹುಡುಕ್ತಾ ಇದ್ದೇ... ನೆಟ್ ನಲ್ಲಿ ಇದು ಸಿಗ್ತು.. ಬಳಸಿಕೊಂಡೆ..
    ಪ್ರತಿಕ್ರಿಯೆಗಾಗಿ ತುಂಬಾ ಧನ್ಯವಾದಗಳು.. ಬರುತ್ತಿರಿ...

    ReplyDelete
  24. Dr. ಗುರುಮೂರ್ತಿ ಸರ್..
    ಧನ್ಯವಾದಗಳು..)

    ReplyDelete